ದಯಾನಾಯಕ್ ದೋಷಮುಕ್ತಿ ಹುಟ್ಟೂರಲ್ಲಿ ಸಂಭ್ರಮ
ಮೂಡುಬಿದಿರೆ:ಆರೋಪಕ್ಕೊಳಗಾಗಿ ಕೆಲಸದಿಂದ ನಿಲಂಬಿತರಾಗಿರುವ ದಯಾನಾಯಕ್ ಅವರನ್ನು ನಿರಪರಾಧಿ ಎಂದು ಬುಧವಾರ ಸುಪ್ರೀಂ ಕೋಟರ್್ ತೀಪರ್ು ನೀಡಿರುವುದರಿಂದ ಅವರ ಹುಟ್ಟೂರು ಕಾರ್ಕಳ ತಾಲಿಲೂಕಿನ ಎಣ್ಣೆಹೊಳೆಯಲ್ಲಿ ಸಂಭ್ರಮಾಚರಣೆಗಳು ನಡೆದವು.
ಇಂದು ಬೆಳಗ್ಗೆನಿಂದಲೇ ಊರ ಸುತ್ತಮುತ್ತ ಅದೇ ವಿಷಯ ಚಚರ್ಿತವಾಗುತ್ತಿದ್ದರೆ,ದಯಾ ನಾಯಕ್ ಅಭಿಮಾನಿಗಳು ಫುಲ್ ಖುಶಿ.
ತನ್ನ ತಾಯಿಯ ಹೆಸರಲ್ಲಿ ಅವರು ರಾಧಾನಾಯಕ್ ಎಜುಕೇಶನ್ ಟ್ರಸ್ಟ್ ಮೂಲಕ ಕಟ್ಟಿಸಿರುವ ರಾಧಾನಾಯಕ್ ಸಕರ್ಾರಿ ಪ್ರೌಢಶಾಲೆಯಲ್ಲಿ ಇಂದು ಸಂಭ್ರಮ ಕಳೆ ಕಟ್ಟಿತ್ತು.
ಪಟಾಕಿ ಸಿಡಿಸಿ , ಸಿಹಿ ಹಂಚಿ ಅಭಿನಂದನೆಯ ಮಾತುಗಳನ್ನು ಆಡಿ ಈ ಸಂಭ್ರಮ ಆಚರಿಸಲಾಯಿತು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಡಾ.ಸಂತೋಷ್ ಕುಮಾರ್ ಅವರು ಸಭೆಯ ಅಧ್ಯಕ್ಷತೆ ವಹಿಸಿ ದಯಾನಾಯಕ್ ಅವರು ಏಕಾಂಗಿಯಾಗಿ ಕಾನೂನು ಹೋರಾಟ ನಡೆಸಿ ಪರಿಶುದ್ಧರಾಗಿರುವುದು ಅಭಿಮಾನದ ಸಂಗತಿ ಎಂದರು.
ಎಡೋಲ್ಫಸ್ ಕ್ವಾಡ್ರಸ್ ಅವರು ಪ್ರಸ್ತಾವಿಕವಾಗಿ ಮಾತನಾಡಿ ದಯಾ ಅವರು ನಡೆಸಿದ ಕಾನೂನು ಹೋರಾಟ ವಿನಾ ಕಾರಣ ಅನುಭವಿಸಿದ ನೋವಿನ ಕಥೆಯನ್ನು ಮಾಮರ್ಿಕವಾಗಿ ತೆರೆದಿಟ್ಟರು.
ರಘುರಾಮ್ ಭಟ್,ಹಸನಬ್ಬ,ಯೈ.ಪಾಂಡುರಂಗ ನಾಯಕ್, ಪ್ರಸನ್ನ ಇಂದ್ರ,ಶಿವಕುಮಾರ್,ದೇವಣ್ಣ ನಾಯಕ್,ಜಯಪಾಲ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.
ವರದಿ:ಶೇಖರ ಅಜೆಕಾರ
ದಯಾನಾಯಕ್ ದೋಷಮುಕ್ತಿ ಹುಟ್ಟೂರಲ್ಲಿ ಸಂಭ್ರಮ/ dayanayakencounterspecialist
6:36 AM
tuluva/ಅಜೆಕಾರು