ಶ್ರೀ ಜಯಪ್ರಕಾಶ್ ಮಾವಿನಕುಳಿ ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ

ಶ್ರೀ ಜಯಪ್ರಕಾಶ್ ಮಾವಿನಕುಳಿ ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ

       ಮೂಡಬಿದ್ರೆ: ನ.೧ ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್‌ನ ಪ್ರಾಯೋಜಕತ್ವದ ೨೦೧೪ರ ಸಾಲಿನ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಶ್ರೀ ಜಯಪ್ರಕಾಶ್ ಮಾವಿನಕುಳಿ ಅವರ ’ಕಾಲಯಾನ’ ಎಂಬ ಕವನಸಂಕಲನ ಹಸ್ತಪ್ರತಿಯು ಗೆದ್ದುಕೊಂಡಿದೆ ಎಂದು ಸಂಘದ ಅಧ್ಯಕ್ಷರಾದ ಡಾ. ನಾ.ಮೊಗಸಾಲೆಯವರು ಪ್ರಕಟಿಸಿದ್ದಾರೆ. ಈ ಸಾಲಿನ ಸ್ಪರ್ಧೆಗೆ ಒಟ್ಟು ೯೭ ಹಸ್ತಪ್ರತಿಗಳು ಬಂದಿದ್ದು,  ವಿಮರ್ಶಕರೂ, ಕವಿಗಳೂ ಆಗಿರುವ ಡಾ. ವಸಂತಕುಮಾರ್ ಪೆರ್ಲ ಮಂಗಳೂರು,ಶ್ರೀ ಸುಬ್ರಾಯ ಚೊಕ್ಕಾಡಿ, ಡಾ.ಎಸ್.ಆರ್. ಅರುಣಕುಮಾರ್ ಅವರುಗಳು ನೀಡಿದ ಅಂಕಗಳ ಆಧಾರದಲ್ಲಿ ಈ ಪ್ರಶಸ್ತಿಯನ್ನು ನಿರ್ಣಯಿಸಲಾಗಿದೆ.
       ೧೯೭೯ರಲ್ಲಿ ನಂದಳಿಕೆಯ ವರಕವಿ ಮುದ್ದಣನ ಹೆಸರಿನಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯು  ಹತ್ತು ಸಾವಿರದ ಗೌರವ ಸಂಭಾವನೆ ಮತ್ತು ತಾಮ್ರಪತ್ರ ಸನ್ಮಾನವನ್ನು ಒಳಗೊಂಡಿದೆ.  ಪ್ರತೀ ವರುಷದಂತೆ ಈ ವರುಷದ ಪ್ರಶಸ್ತಿ ಪ್ರದಾನ ಸಮಾರಂಭವು ೨೦೧೫ರ ಜನವರಿಯಲ್ಲಿ ಕಾಂತಾವರದ ’ಕನ್ನಡಭವನ’ದಲ್ಲಿ ನಡೆಯಲಿದ್ದು ಪ್ರಶಸ್ತಿಯ ಪ್ರಾಯೋಜಕರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅವರು ಪ್ರಶಸ್ತಿ ಪ್ರದಾನವನ್ನು ನೆರವೇರಿಸಲಿರುವರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ತಿಳಿಸಿದ್ದಾರೆ.
   
ಶ್ರೀ ಜಯಪ್ರಕಾಶ ಮಾವಿನಕುಳಿ ಅವರ ಪರಿಚಯ:
    ಸಮಾಜ ವಿಜ್ಞಾನ ಮತ್ತು ಸಾಹಿತ್ಯ ಎರಡೂ ಕ್ಷೇತ್ರಗಳ ವಿದ್ವಾಂಸರಾಗಿರುವ ಡಾ. ಜಯಪ್ರಕಾಶ ಮಾವಿನಕುಳಿಯವರು ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕ, ರೀಡರ್, ಪ್ರೊಫೆಸರರಾಗಿ ೩೪ ವರ್ಷದ ಬೋಧನಾನುಭವ ಉಳ್ಳವರು. ಪ್ರತಿಷ್ಠಿತ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಿದೆ. ಅವರು ಮಂಡಿಸಿದ್ದ ’ರಾಜಕೀಯ ಮತ್ತು ಸಂಸ್ಕೃತಿ’ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿದೆ.
    ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಘಟನೆಯಲ್ಲಿ ಹಲವು ದಶಕಗಳ ಕಾಲ ದುಡಿದಿರುವ ಅವರು, ಮಂಗಳೂರು, ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯಗಳ ಅಧ್ಯಯನ ಮಂಡಳಿಗಳಲ್ಲಿ ಸದಸ್ಯರಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್, ಸಿಂಡಿಕೇಟ್ ಮತ್ತು ಅಕಾಡೆಮಿಕ್ ಕೌನ್ಸಿಲಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದಿದೆ. ಹಾಗೇ ಅವರು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ರಚನಾತ್ಮಕವಾಗಿ ಕಾರ್ಯನಿರ್ವಹಿಸಿರುವುದರ ಜೊತೆಗೆ  ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಗುರುತಿಸಿಕೊಂಡಿದ್ದಾರೆ. ಮಂಗಳೂರಿನಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನಕಾರ್ಯದರ್ಶಿಯಾಗಿ ದುಡಿದ ಹೆಗ್ಗಳಿಕೆ ಅವರಿಗಿದೆ.
    ಸಂಸ್ಕೃತಿ ಚಿಂತಕರಾಗಿಯೂ ಡಾ. ಮಾವಿನಕುಳಿಯವರು ಕ್ರಿಯಾಶೀಲರಾಗಿದ್ದಾರೆ. ಸಾಹಿತ್ಯ, ರಂಗಭೂಮಿ, ಸಂಸ್ಕೃತಿ ಚಿಂತನೆಗೆ ಸಂಬಂಧಿಸಿದ ೪೯ ಪುಸ್ತಕಗಳನ್ನು ಅವರು ಪ್ರಕಟಿಸಿದ್ದಾರೆ. ಕಾವ್ಯ, ಕಥೆ, ಕಾದಂಬರಿ, ಲಲಿತ ಪ್ರಬಂಧ, ವಿಚಾರ ಸಾಹಿತ್ಯ ಹೀಗೆ ಎಲ್ಲಾ ಪ್ರಕಾರಗಳಲ್ಲೂ  ಕೈಯಾಡಿಸಿರುವ ಅವರ ಕವನಸಂಗ್ರಹಗಳು: ’ಸಾಗರದಲ್ಲಿ ಸಾಯಂಕಾಲ’, ’ವಿರಹ ಕಡಲು’ ಇತ್ಯಾದಿ. ಕಥಾಸಂಕಲನಗಳು: ’ಕಾಲ’, ’ಚಂದಿರನೇತಕೆ ಓಡುವನಮ್ಮ’. ನಾಟಕಗಳು: ’ಅವಲೋಕನ’, ’ಅಶ್ವತ್ಥಾಮ’, ’ಶೆಫಾಲಿಕಾ’, ’ನಿರಾಕರಣ’, ’ಪಾರ್ಟಿ’, ’ಮಹಾಯಾತ್ರೆ’, ’ಕೊಡೆಯಪ್ಪನ ಕಥಾ ಪ್ರಸಂಗ’, ’ರೂಪಾಂತರ’, ’ಅಕ್ಬರ’ ಮೊದಲಾದುವು. ’ರತ್ನಾಕರ’, ’ಚೂಡಾಮಣಿ’, ’ಸುವರ್ಣ ಸಂಸ್ಕೃತಿ’, ’ಲಂಕೇಶರ ನಾಟಕಗಳು’, ’ನಮ್ಮ ಪ್ರೀತಿಯ ಸುಬ್ಬಣ್ಣ’, ’ಕಾರಂತ ಯುಗಾಂತ’, ’ಇಂದೂ ಇರುವ ಗಾಂಧಿ’ - ಅವರ ಸಂಪಾದಿತ ಕೃತಿಗಳಾಗಿವೆ. ಈಗಾಗಲೇ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಲಭಿಸಿರುವ  ಅವರಿಗೆ ಇದೀಗ ಮುದ್ದಣ ಕಾವ್ಯ ಪ್ರಶಸ್ತಿಯ ತುರಾಯಿ ಲಭಿಸಿದೆ.
                                                                                

Kambala Time Table 2014-15 Anounced - First News

Kambala list -2014- 15 Official
by: Shekar Ajekar:ekAr( Udupi dist) : Jilla Kambala Samiti covering three disrtict Dakshina Kannada,
udupi and Kasaragod announced its Annual Kambala time table officialy by releasing yearly time sheet today.
The President of the commitee Senior Kambalaman Irvattoor Baskar Kotian said "
the co-operation of viewers, Organisers, Kambala Befallo Owners and others highly
needed for the success of all events"
Kambala List with place where it happening
1.November:15-2014- Saturday- Shirva Nadibettu- Udupi Dist
2.November:23-2014- Sunday- Suratkal Madhavanagar- Dakshina Kannada
3.November:30-2014- Sunday- Bangadikolli- Near Belhangandy- Dakshina Kannada
4.December:06-2014- Saturday- Venoor-Permuda- Belthangady Taluk District
5.December;13-2014- Saturday-Baaraadi Beedu-near Belvai or Sanoor- Karkala Taluk-udupi
6.December:20-2014- saturday- Hokkadigoli- Bantwala Taluk- D.K dist
7 .December:25-2014 - Thursday- Mulky Seeme- Mangalore Taluk, Dakshina Kannada 
8.December: 28-2014-Sunday- Peruvaje -Bellare- Sullia taluk-Daksshina Kannada
9.January:03-2015- Sunday- Adve-Nandikoor-Near Padubidre- Udupi Taluk & Dist
10.January 10-2015-S aturday- Miyyar Near Karkala- Udupi Dist
11.January:17-2015- Saturday-Moodubidre- Dakshina Kannada Dist
12 January: 24 -2015-Saturday- Aikala Bava-Near Kinnigoly- Dakshina Kannada
13.January: 31-2015- Saturday  Katapaday Beedu- Near Udupi & Udupi dist
14.February: 1-2015- Sunday- Panapila- Nandottu- Mangalore Taluk
15.February: 7-2015- Saturday- Pilikula Nisargadhama- Near Vamanjoor-Mangalore Taluk
16.February:8-2015- Sunday-Kellaputtige- Near Belvai- Mangalore Taluk
17.February:14-2015-Saturday- Eedu- Near Bajagoli- Karkala Taluk
18.February: 21-2015 Saturday -Altaru Barkur Near Brahmavar- Udupi Dist
19.February:22-2015- Sunday- Vamanjur Viruvail-Mangalore Taluk
20.Feuary:28-2015- Saturday-  Kakyapadavu-Bantwala aluk- dikashina KAnnada
21.March-8-2015- Puttoor- Puttoor Taluk- Dakshina.Kannada
22.March-15- 2015-Sunday- Jappina mogaru- Near Mangalore
23:March 21-2015-Saturday-Uppinangady- Puttoor Taluk
24.March 28-2015-Saturday-Talapady-Panjala- in Mangalore-Kasaragod Road
   

ಕೃಷ್ಣನೇ ಮೊಸರು ಕುಡಿಕೆ ಒಡೆಯುವ ರಾಷ್ಟ್ರದ ವಿಶೇಷ:


ಕೃಷ್ಣನೇ ಮೊಸರು ಕುಡಿಕೆ ಒಡೆಯುವ ರಾಷ್ಟ್ರದ ವಿಶೇಷ:
 ಕರಾವಳಿಯ ಮೂಡುಬಿದಿರೆಯಲ್ಲಿ ಶ್ರೀ ಕೃಷ್ಣನೇ
ಮೊಸರು ಕುಡಿಕೆ ಒಡೆಯುವ ಸಂಪ್ರದಾಯ. ಇಲ್ಲಿ ಕೃಷ್ಣನಲ್ಲದೆ ಬೇರೆ ಯಾರೂ ಮೊಸರು ಕುಡಿಕೆ ಒಡೆಯುವಂತಿಲ್ಲ. ಒಡೆಯುವುದಿಲ್ಲ.
ರಾಷ್ಟ್ರದಾದ್ಯಂತ ಆಗಸ್ಟ್ 28- 29ರಂದು ಶ್ರೀ ಕೃಷ್ಣಾಷ್ಟಮಿ ಮತ್ತು ಅದರ ಪ್ರಯುಕ್ತ ಮೊಸರು ಕುಡಿಕೆ ಉತ್ಸವಗಳು ನಡೆಯುವುದು ಮತ್ತು ಮಾನವ ಶಕ್ತಿಯಿಂದ ಅದನ್ನು ಒಡೆಯುವುದು ಸಂಪ್ರದಾಯವಾದರೆ ಇಲ್ಲಿ ಅದಕ್ಕೆ ತದಿರುದ್ಧವಾಗಿ ಶ್ರೀ ಕೃಷ್ಣನೇ ಬೀದಿಗಳಿದು ರಸ್ತೆಯುದ್ಧಕ್ಕೂ ಕಟ್ಟಲಾದ ಮೊಸರು- ಬಣ್ಣದುಂಬಿದ ಮತ್ತು ಇತರ ವಸ್ತುಗಳಿಂದ ಕೂಡಿದ ಮೊಸರು ಕುಡಿಕೆಗಳನ್ನು ಒಡೆಯುವುದು ವಿಶೇಷ.
ಹಾಗಾದ್ರೆ ಕೃಷ್ಣ ಯಾರು? ಬರುವುದು ಎಲ್ಲಿಂದ ಎಂಬುದು ಇಲ್ಲಿ ಮುಖ್ಯವಾಗುತ್ತದೆ.
 ಮೂಡುಬಿದಿರೆ ಕೆಳ ಪೇಟೆಯ ಶ್ರೀ ಕೃಷ್ಣ ದೇವಾಲಯದಿಂದ ಯಕ್ಷಗಾನ ರೂಪಿ ಅಂದ್ರೆ ತೆಂಕು ತಿಟ್ಟಿನ ವೇಷಧಾರಿ ಕೃಷ್ಣ ಮಧ್ಯಾಹ್ನದ ಪೂಜೆ ಮುಗಿಸಿ ಹೊರಟರೆ ಮತ್ತೆ ದೇವಾಲಯ ಸೇರುವುದು ರಾತ್ರಿಯೇ ಸರಿ.
ದಾರಿಯುದ್ದಕ್ಕೂ ಅಂಗಡಿ- ವಹಿವಾಟುದಾರರು ಮತ್ತು ವಿವಿಧ ಸಂಸ್ಥೆಗಳು ಕಟ್ಟುವ ಮಡಕೆಗಳನ್ನು ಯಕ್ಷಗಾನ ಹಿಮ್ಮೇಳದೊಂದಿಗೆ ಕುಣಿದು  ಕೃಷ್ಣ ವೇಷಧಾರಿ ಒಡೆಯುತ್ತಾ ಹೋಗುವುದು ತೀರಾ ವಿಶಿಷ್ಟವಾದ ಮತ್ತು ಮೂಡುಬಿದಿರೆಗೆ ಮಾತ್ರ ಇರುವ ವಿಶೇಷ ಆಕರ್ಷಣೆ.
ನಾಗರ ಕಟ್ಟೆ ಮತ್ತು ವೆಂಕಟರಮಣ ದೇವಾಲಯದ ವಠಾರದಲ್ಲಿ ಕೃಷ್ಣ ಮಿತ್ರ ಮಂಡಳಿಗಳು ಅಷ್ಟಮಿ ಪ್ರಯುಕ್ತ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿವೆ. ಸಾವಿರಾರು ಮಂದಿ ಕಾರ್ಯಕ್ರಮವನ್ನು ಆಸ್ವಾದಿಸಿದರು.

ಹಿರ್ಗಾನ ನೆಲ್ಲಿಕಟ್ಟೆಯಲ್ಲಿ ಭಕ್ತರ ದಂಡು: ಮೊದಲ ನೇಮೋತ್ಸವ ಸಂಭ್ರಮ:












ಹಿರ್ಗಾನ ನೆಲ್ಲಿಕಟ್ಟೆಯಲ್ಲಿ ಭಕ್ತರ ದಂಡು:
ಮೊದಲ ನೇಮೋತ್ಸವ ಸಂಭ್ರಮ:
ಪತ್ರನಾಜೆಯ ಬಳಿಕ ಕರಾವಳಿ ಕರ್ನಾಟಕದಲ್ಲಿ ನಡೆಯುವ ಮೊತ್ತಮೊದಲ ನೇಮೋತ್ಸವ ಕಾರ್ಕಳ ತಾಲೂಕಿನ ಹಿರ್ಗಾನ ಹಾಡಿ ಶ್ರೀ ಬ್ರಹ್ಮ ಬೈದರ್ಕಳ:
ಮಾಯಂದಾಲ ದಏವಿ ಸನ್ನಿಧಿಯಲ್ಲಿ ಶನಿವಾರ ಮತ್ತು ಭಾನುವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.
ಸಿಂಹ ಸಂಕ್ರಮಣದ ದಿನದಂದು ಆರಂಭವಾಗಿ ಮೂರುದಿನಗಳ ಬಾರಿ ಸಂಖ್ಯೆಯ ಭಕ್ತಾಭಿಮಾನಿಗಳ ಪಾಲ್ಗೊಳ್ಳುವಿಕೆಯಲ್ಲಿ ನಡೆಯಿತು. ಭಾನುವಾರ
ಶನಿವಾರ ರಾತ್ರಿ ೮.೩೦ ರಿಂದ ಬ್ರಹ್ಮ ಬೈದರ್ಕಳ ನೇಮೋತ್ಸವ ನಡೆಯಿತು. ಅದಕ್ಕೂ ಮುನ್ನ ಬ್ರಹ್ಮೆರ್ ಬಲಿ ಸೇವೆ ನಡೆಯಿತು.
ಇಲ್ಲಿನ ಮಾಯಂದಲ ದೇವಿಯು ಬಹಳ ಪ್ರಸಿದ್ಧಿಯಾಗಿದ್ದು ದೇವಿಯ ನೇಮೋತ್ಸವ ಭಾನುವಾರ ೧೧.೩೦ ರಿಂದ ಆರಂಭವಾಗಿ ರಾತ್ರಿಯವರೆಗೆ ಮುಂದುವರೆಯಿತು.
ಸಂತಾನ, ಮದುವೆಗಾಗಿ, ಕಳೆದು ಹೋದ ವಸ್ತುಗಳಿಗಾಗಿ ಇಲ್ಲಿಗೆ ಹರಕೆ ಸಲ್ಲಿಸಿ ಫಲ ಪಡೆದವರು ಮಾಯಂದಲ ದೇವಿಯಿಂದ ಪ್ರಸಾದ ಸ್ವೀಕರಿಸಿ
ಧನ್ಯರಾಗುವ ಕ್ಷಣಗಳು ದಾಖಲಾದವು.
ಶಿವಮೊಗ್ಗ, ಮುಂಬಯಿ, ಬೆಂಗಳೂರು, ಪೂನಾ, ವಿದೇಶದಲ್ಲಿರುವವರು ಮತ್ತು ಕರಾವಳಿಯ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು.
ಸಾಮಾಜಿಕ ನ್ಯಾಯ ವ್ಯವಸ್ಥೆ
ಭಕ್ತ ವರ್ಗಕ್ಕೆ ಸೇರಿದವರ ಧಾರ್ಮಿಕ, ಸಾಮಾಜಿಕ ಮತ್ತು ಕೌಂಟುಂಬಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಶ್ನೆ ಕಾರ್ಯಕ್ರಮ ಸುಮಾರು ಎಂಟು ಗಂಟೆಗಳ ಕಾಲ ನಡೆಯುತ್ತದೆ.
ಪ್ರವೀಣ್ ಭಟ್ ಕನಂಗಿ ಪ್ರಧಾನ ತಂತ್ರಿಗಳು ಪ್ರಶ್ನೆ ಮತ್ತು ಧಾರ್ಮಿಕ ವಿಧಾನಗಳನ್ನು ನೆರವೇರಿಸಿದರು.
ಆಡಳಿತ ಸಮಿತಿಯ ಅಧ್ಯಕ್ಷ ಎಚ್. ಶಿವಣ್ಣ, ಕಾರ್ಯದರ್ಶಿ ರವೀಂದ್ರ ಪೂಜಾರಿ, ಪ್ರಧಾನ ಅರ್ಚಕ ಕೃಷ್ಣಪ್ಪ ಪೂಜಾರಿ ಮತ್ತು ನೂರಾರು ಸ್ವಯಂ ಸೇವಕರು ವ್ಯವಸ್ಥೆಯಲ್ಲಿ ಸಹಕರಿಸಿದರು.
ವರ್ಷಾವಧಿ ಉತ್ಸವದ ಮೊದಲ ದಿನವಾದ ಶುಕ್ರವಾರ ಶ್ರೀನಿವಾಸ ಕೃಪಾ ಕಾನಂಗಿ ಅವರ ಸೇವೆಯಾಗಿ ಅನ್ನ ಸಂತರ್ಪಣೆ ನಡೆಯಿತು.
ದೇವಾಲಯದ ಜೀರ್ಣೋದ್ಧಾರ ಪ್ರಕ್ರಿಯೆಯನ್ನು ೧.೫೭ ಕೋಟಿ ರೂಪಾಯಿಯ ಯೋಜನೆಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದು ಸಂಪೂರ್ಣ ಶಿಲಾಮಯವಾಗಿ ನವೀಕರಿಸಲಾಗುತ್ತಿದೆ.

Mangalore: Shekar Ajekar’s e-book released- daijiworld.com news

Mangalore: Shekar Ajekar’s e-book released

Pics: Brijesh Garodi
Daijiworld Media Network- Mangalore

Mangalore, Aug 15: ‘Maha Ananda’, an e-book, written by Shekar Ajekar, was released by veteran journalist Dhananjay Moodabidri, who has rendered services in Mumbai Kannada Publications.
The programme was held here at Press Club on Wednesday August 14.
Speaking on the occasion, Shekar Ajekar said that these days, the new e-technology has been able to reach greater number of viewers. The book has already been released atwww.ajekar.blogspot.com and in the coming days the print version will be released.
This book is dedicated to the life history of Anand Alva, father of Mohan Alva, founder of Alva's Education Trust, as a gift for his 95th birthday. The preface of this book was given by Dr D Veerendra Hegde of Dharmasthala.

ಪೆರ್ಡೂರಿನಲ್ಲಿ ಮೇಳವಿಸಿದ ಮದುಮಕ್ಕಳ ದಂಡು perdoor news bys hekar ajekar














ಪೆರ್ಡೂರಿನಲ್ಲಿ ಮೇಳವಿಸಿದ ಮದುಮಕ್ಕಳ ದಂಡು
ಸಿಂಹ ಸಂಕ್ರಮಣಕ್ಕೆ ಸಂಭ್ರಮಿಸಿದ ಅನಂತ ಪದ್ಮನಾಭನ ಭಕ್ತರು
ಸಿಂಹ ಸಂಕ್ರಮಣದದ ದಿನವಾದ ಶನಿವಾರ ಪೆರ್ಡೂರಿನಲ್ಲಿ ಮುಂಜಾವಿನ ನಾಲ್ಕರಿಂದ ಭಕ್ತರ ಸರತಿ ಸಾಲು. ಮುಂಜಾನೆ ಐದು ಐದೂವರೆ ಗಂಟೆಗೆ ಮೊದಲ ಪೂಜೆ ನಡೆಯುವುದು ಇಲ್ಲಿನ ವಾಡಿಕೆಯಾಗಿದೆ. ಪೆರ್ಡೂರಿನ ಸುತ್ತಮುತ್ತಲಿನ ಊರುಗಳು, ತಾಲೂಕುಗಳು ಮತ್ತು ಜಿಲ್ಲೆಗಳ ಭಕ್ತರು ತಮ್ಮ ಕುಟುಂಬದ ಯಾರಿಗೆ ಮದುವೆಯಾದರೂ ನವ ದಂಪತಿಗಳನ್ನು ಈ ಸಂಕ್ರಮಣಕ್ಕೆ ಕರೆತರುವುದು ಅಥವಾ ಕಳುಹಿಸುವುದು
ಸಂಪ್ರದಾಯವಾಗಿರುವುದರಿಂದ ಇಲ್ಲಿ ಈ ದಿನ ಸಾವಿರಾರು ಹೊಸ ಜೋಡಿಗಳು ಸಡಗರ ಸಂಭ್ರಮದಿಂದ ಆಗಮಿಸುತ್ತಾರೆ.
ಮದುಮಕ್ಕಳೇ ಅಧಿಕ ಸಂಖ್ಯೆಂiiಲ್ಲಿ ಜೊತೆಯಾಗಿ ಆಗಮಿಸಿ ಪೂಜೆ ಸಲ್ಲಿಸುವುದು ಈ ಭಾಗದಲ್ಲಿ ವಿಶೇಷವಾಗಿದ್ದು ಈ ಹಬ್ಬಕ್ಕೆ ಮದುಮಕ್ಕಳ ಜಾತ್ರೆ ಎಂಬ ಹೆಸರು ಬಂದಿದೆ.
ನಾವು ಮದುವೆಯಾದ ಮೊದಲ ಸಂಕ್ರಮಣಕ್ಕೆ ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಾಲಯಕ್ಕೆ ದಂಪತಿಗಳು ಕುಟುಂಬಿಕರೊಂದಿಗೆ ಪೂಜೆಗೆ ಹೋಗಿದ್ದೆವು. ಆದರೆ ಸಿಂಹ ಸಂಕ್ರಮಣಕ್ಕೆ ಆ ವರ್ಷ ಮದುವೆಯಾದ ದಂಪತಿಗಳು ಹೋಗಿ ಅನಂತ ಪದ್ಮನಾಭ ದೇವರ ಆಶೀರ್ವಾದ ಪಡೆಯ ಬೇಕೆಂಬ ಒಂದು ಕ್ರಮ ನಡೆದು ಬಂದಿರುವುದರಿಂದ ನಾವು ಇಂದು ಬಂದು ಪೂಜೆ ಸಲ್ಲಿಸಿದ್ದೇವೆ ಎಂದು ನೆಲ್ಲಿಕಟ್ಟೆಯ ಸಂತೋಷ್- ಸೌಭಾಗ್ಯ ದಂಪತಿಗಳು ಪತ್ರಿಕೆಯೊಂದಿಗೆ ಅಭಿಪ್ರಾಯ ಪಟ್ಟರು.
ನಾವು ಮುಂದಿನ ಭವಿಷ್ಯಕ್ಕೆ ಒಳ್ಳೆಯದಾಗಲಿ ನಮಗೆ ನಮ್ಮ ಊರಿಗೆ ಒಳ್ಳೆಯದಾಗಲಿ ಎಂಬ ಆಶಯದೊಂದಿಗೆ ಮದುಮಕ್ಕಳ ಸಂಭ್ರಮದ ಈ ದಿನ ಇಲ್ಲಿ ಬಂದು ಪೂಜೆ ನೆರವೇರಿಸಿದೆವು ಎಂದು ಹೆಬ್ರಿಯ ಲಕ್ಷ್ಮಿ - ನಾರಾಯಣ ದಂಪತಿಗಳು ತಿಳಿಸಿದರು.
ಯಾವಾಗಲೂ ಅವಕೃಪೆ ತೋರುವ ಮಳೆರಾಯ ಈ ಬಾರಿ ಬೆಳಗ್ಗನಿಂದ ಮಧ್ಯಾಹ್ನದವರೆಗೂ ಅನುಕೂಲ ಮಾಡಿಕೊಟ್ಟದ್ದು ಭಕ್ತಾದಿಗಳ ಸಂತೋಷವನ್ನು ಹೆಚ್ಚಿಸಿತ್ತು.
ಬೆಳಗ್ಗೆ ಬೇಗ ಇದ್ದ ಬಾರಿ ಜನ ಜಂಗುಳಿ ೯-೧೦ ಗಂಟೆ ಹೊತ್ತಿಗೆ ಕಡಿಮೆ ಅನಿಸುವಾಗಲೇ ಮತ್ತೆ ಭಕ್ತರ ದಂಡು ಹರಿದು ಬಂದು ಬಾರಿ ಉದ್ದದ ಸಾಲುಗಳಲ್ಲಿ ದರ್ಶನಕ್ಕೆ ಸಾಗುತ್ತಿದ್ದರು.
ವರ್ಷದಂತೆ ಈ ಬಾರಿಯೂ ೧೧.೩೦ ಗಂಟೆಯಿಂದಲೇ ಅನ್ನದಾನ ಕಾರ್ಯಕ್ರಮ ದೇವಾಲಯದ ಸಭಾಂಗಣದಲ್ಲಿ ನಡೆದು ಸಾವಿರಾರು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು.
ಸಾವಿರ ಬಾಳೆಹಣ್ಣಿನ ಹರಕೆ
ಸಹಸ್ರ ಕದಳಿ ಫಲ ಸಮರ್ಪಣೆಯ ಹರಕೆ ಇಲ್ಲಿನ ಪ್ರಮುಖ ಹರಕೆಗಳಲ್ಲಿ ಪ್ರಮುಖವಾಗಿದ್ದು ನೂರಾರು ಜನ ಆ ಹರಕೆ ನೀಡುವವರು ಅಲ್ಲಿ ಕಂಡು ಬರುತ್ತಿದ್ದು ತಾವು ಅರ್ಪಿಸಿದ ಹಣ್ಣಗಳನ್ನು ಬಂಧು ಮಿತ್ರರಿಗೆ ಮತ್ತು ಭಕ್ತಾಧಿಗಳಿಗೆ ಪ್ರಸಾದವಾಗಿ ವಿತರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಅಕ್ಕಿ ಹರಕೆ ಇಲ್ಲಿನ ಇನ್ನೊಂದು ಹರಕೆಯಾಗಿದ್ದು ದೇವಾಲಯದ ಮುಂಭಾಗದಲ್ಲಿ ಅದನ್ನು ಸಲ್ಲಿಸುತ್ತಿದ್ದರು.
" ಬೆಳೆ ಚೆನ್ನಾಗಿ ಆಗಲಿ, ಆರೋಗ್ಯ ಸಮಸ್ಯೆ ಪರಿಹಾರವಾಗಲಿ, ಐಶ್ವರ್ಯ ವೃದ್ಧಿಯಾಗಲಿ ಎಂಬ ಕಾರಣಗಳಿಗಾಗಿ ಈ ಅಕ್ಕಿ ಹರಕೆ ಸಲ್ಲಿಸುತ್ತಾರೆ. ಈ ಭೂಮಿ ನಾಗದೇವರ ಆಧೀನವಾಗಿದ್ದು ಅವರ ಭೂಮಿಯಲ್ಲಿ ಮಾಡಿದ ಕೃಷಿಯ ಫಲ ಕಾಣಿಕೆ ಅನಂತ ಪದ್ಮನಾಭದೇವರ ಚರಣಾರವಿಂದಗಳಿಗೆ ಸಮರ್ಪಣೆ ಆಗಲಿ ಎಂಬ ದೃಷ್ಟಿಯಿಂದ ಸಮರ್ಪಿಸುತ್ತಾರೆ ಎಂದು ಈ ಹರಕೆಯ ಕುರಿತು ಹಿರಿಯರಾದ ಕೃಷ್ಣ ಅಡಿಗ ತಿಳಿಸಿದ್ದಾರೆ.
ಇಲ್ಲಿ ಬೆಳಗ್ಗಿನ ಪೂಜೆಗೆ ಸಂಕ್ರಾಂತಿ ಬೇಕಾಗಿರುವುದರಿಂದ ಈ ಬಾರಿ ಆ.೧೭ ರಂದು ಸಂಕ್ರಾಂತಿ ಬಂದಿದೆ. ಸಾಮಾನ್ಯವಾಗಿ ಸಂಕ್ರಾಂತಿ ಶುಕ್ರವಾರ ಆಚರಿಸಲಾಗುತ್ತಿದ್ದರಿಂದ ನೂರಾರು ಭಕ್ತರು ನಿನ್ನೆಯೂ ಆಗಮಿಸಿ ತಮ್ಮ ಹರಕೆ ಸಲ್ಲಿಸದರು.
ದೇವಾಲಯದ ಸಿಬ್ಬಂಧಿಗಳು, ಹೆಚ್ಚುವರಿ ಸ್ವಯಂ ಸೇವಕರ ಸಹಕಾರದಿಂದ ಭಕ್ತರಿಗೆ ಬೇಕಾದ ಸೇವೆಯನ್ನು ಒದಗಿಸುತ್ತಿದ್ದರು.
ಆರೋಗ್ಯ ಇಲಾಖೆಯ ಸೇವೆ
ಆರೋಗ್ಯ ಇಲಾಖೆಯ ನೌಕರರು ದೇವಾಲಯಕ್ಕೆ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷೆಯನ್ನು ಏರ್ಪಡಿಸಿದ್ದು ಪರೀಕ್ಷೆ ನಡೆಸಿ ಅವರಿಗೆ ಸೂಕ್ತ ಮಾಹಿತಿ ನೀಡುತ್ತಿದ್ದರು.
ಅವರ ಈ ಸೇವೆ ಪ್ರಶಂಸೆಗೆ ಪಾತ್ರವಾಯಿತು. ದೇಶದ ಪ್ರಮುಖ ಚಾನೆಲ್‌ಗಳ ಪ್ರತಿನಿಧಿಗಳು ಈ ಒಂದು ಘಟನೆಯನ್ನು ಸೆರೆಹಿಡಿಯಲು ಸೇರಿದ್ದರು.

Mahaananda book by shekar ajekar


issuu.com/tuluva/docs/ananda_alva_book_e?e=1973780/4407152

Twitter Facebook Delicious Digg Favorites More

 
Twitter Facebook Delicious Digg Favorites More