ವಿದ್ಯಾರ್ಥಿ ಸಮ್ಮೇಳನ ನ.೧ ಕ್ಕೆ ಅಜೆಕಾರು ಪದ್ಮಗೋಪಾಲ ಎಜುಕೇಶನ್ ಟ್ರಸ್ಟ್ನ ಕಾರ್ಕಳ ಜ್ಞಾನ ಸುಧಾ ಕಾಲೇಜಿನ ವತಿಯಿಂದ ರಾಜ್ಯ ಮಟ್ಟದ ಜ್ಞಾನಸುಧಾ ವಿದ್ಯಾರ್ಥಿ ಸಮ್ಮೇಳನ ನ.೧ ರಂದು ಕುಕ್ಕುಂದೂರಿನ ಕಾಲೇಜು ಆವರಣದಲ್ಲಿ ನಡೆಯಲಿದೆ. ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ಶ್ರೀವತ್ಸ ಸಿ.ಎಸ್ ಅವರು ಸಮ್ಮೇಳನಾಧ್ಯಕ್ಷರು.ಇತರ ೨೯ ಮಂದಿ ಕಥೆ,ಕವಿತೆ ಮತ್ತು ವಿಚಾರಗೋಷ್ಠಿಗಳಲ್ಲಿ ಭಾಗವಹಿಸಲಿರುವರು. ಇತ್ತೀಚಿಗೆ ನೂತನವಾಗಿ ಆರಂಭವಾದ ಕಾಲೇಜು ಈ ತೆರನ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದು ಸಾರ್ವತ್ರಿಕ ಪ್ರಶಂಸೆಗೆ ಕಾರಣವಾಗಿದೆ.