ಮೊತ್ತ ಮೊದಲ ಸುದ್ಧಿ
ಕಂಬಳ ಸಮತಿಗೆ ನೂತನ ಅಧ್ಯಕ್ಷರಾಗಿ
ಬೆಳುವಾಯಿ ಸದಾನಂದ ಶೆಟ್ಟಿ ಆಯ್ಕೆ
ಮೂಡುಬಿದಿರೆ: ಕಂಬಳ ಕ್ಷೇತ್ರದಲ್ಲಿ ಖ್ಯಾತ ನಾಮಾಂಕಿತರಾದ ಬೆಳುವಾಯಿ ಸದಾನಂದ ಶೆಟ್ಟಿ ಅವರು ಅವಿಭಜಿತ ದಕ್ಷಿಣ ಕನ್ನಡ ಕಾಸರಗೋಡು ಸಹಿತ ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷರಾಗಿ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.ಅವರು ಹಿಂದಿನ ಸಮಿತಿಯಲ್ಲಿ ಉಪಾಧ್ಯಕ್ಷರಾಗಿದ್ದರು.
ಅವರು ಸಮಿತಿಯ ಮೂರನೇ ಅಧ್ಯಕ್ಷರಾಗಿದ್ದು ಡಾ.ಜೀವಂಧರ್ ಬಲ್ಲಾಳ್ ಅವರು ನಿರ್ಗಮನ ಅಧ್ಯಕ್ಷರಾಗಿದ್ದು ಕಳೆದ ಒಂದು ದಶಕಕ್ಕಿಂತ ಹೆಚ್ಚು ಕಾಲ ಅಧ್ಯಕ್ಷರಾಗಿದ್ದರು.
ಕಾರ್ಯದರ್ಶಿಯಾಗಿ ಗುಣಪಾಲ ಕಡಂಬ ಅವರು ಪುನರಾಯ್ಕೆಯಾಗಿದ್ದಾರೆ. ಕಂಬಳದ ಹಿರಿಯರಾದ ಬೊಳಂತೂರುಗುತ್ತು ಗಂಗಾಧರ ರೈ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಸುರತ್ಕಲ್ ಗೋಪಾಲಕೃಷ್ಣ ಪ್ರಭು, ಮಹಾಕಾಳಿಬೆಟ್ಟು ಸೀತಾರಾಮ ಶೆಟ್ಟಿ, ಚಂದ್ರಹಾಸ ರೈ ಪುತ್ತೂರು,ಮಧ್ವ ಚಂದ್ರಹಾಸ ರೈ, ಈದು ಅಶೋಕ್ ಕುಮಾರ್ ಜೈನ್ ಆಯ್ಕೆಯಾದರು.
ಕಾರ್ಯದರ್ಶಿಗಳಾಗಿ ಎಡಪದವು ಕಾಲೇಜಿನ ಕ್ರೀಡಾ ನಿರ್ದೇಶಕ ನವೀನ್ ಅಂಬೂರಿ ಮತ್ತು ವಕೀಲ ಸುರೇಶ್ ಕೆ. ಪೂಜಾರಿ ಆಯ್ಕೆಯಾದರು. ಚಂದ್ರಹಾಸ ಸನಿಲ್ ಮತ್ತು ಸಾಣೂರು ಶ್ರೀಧರ ಆಚಾರ್ಯ ಅವರು ಜೊತೆ ಕಾರ್ಯದರ್ಶಿಗಳಾಗಿರುವರು.
ವಿವಿಧ ಕ್ಷೇತ್ರಗಳಿಂದ ಪ್ರತಿನಿಧಿಗಳನ್ನು ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಗುತ್ತಿದೆ.
ನೂತನ ಪದಾಧಿಕಾರಿಗಳನ್ನು ಮೂಡುಬಿದರೆಯ ಹೋಟೇಲಿನಲ್ಲಿ ನಡೆದ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.
First News from Ajekar: SADANANDA SHETTY ELECTED AS KAMBALA COMMITEE PRESIDENT
5:31 AM
tuluva/ಅಜೆಕಾರು